ಕಿರುತೆರೆಯಲ್ಲಿರುವ ಎಲ್ಲಾ ಶ್ರಮಜೀವಿಗಳ ಏಳಿಗೆಗಾಗಿ…
ಮನುಷ್ಯ ಹುಟ್ಟಿದಾಗ ಮಾತ್ರ ಒಂಟಿ, ಆನಂತರ ಹತ್ತು ಹಲವಾರು ಸದಸ್ಯರಿರುವ ಕುಟುಂಬದಿಂದ ಹಿಡಿದು ಶಾಲೆ, ಕಛೇರಿ ಹೀಗೆ ತಾನು ಹೋದಲ್ಲೆಲ್ಲಾ ಸಾಕಷ್ಟು ಸ್ನೇಹ ಬಳಗ ಹೊಂದಿ ಸಂಘ ಜೀವಿಯಾಗಿದ್ದಾನೆ. ಮನುಷ್ಯ ಒಂಟಿಯಾಗಿ ಏನನ್ನು ಸಾಧಿಸಲು ಸಾಧ್ಯವಿಲ್ಲ. ಒಂಟಿಯಾಗಿ ಬದುಕಲು ಸಾದ್ಯವಿಲ್ಲ. ಒಂಟಿಯಾಗಿ ನಡೆದಷಷ್ಟೂ ದಣಿವು ಜಾಸ್ತಿ, ಮಾನವನಾಗಿ ಹುಟ್ಟಿದ ಮೇಲೆ ಬಡವನಿರಲಿ ಶ್ರೀಮಂತರಿರಲಿ ಎಲ್ಲರಿಗೂ ಸುಖ ದುಖಃ, ನೋವು ನಲಿವು ಎಲ್ಲವೂ ಸರ್ವೇ ಸಾಮಾನ್ಯ. ನಮಗೆ ಖುಷಿಯಾದಾಗ ಅದನ್ನು ವ್ಯಕ್ತಪಡಿಸುವುದಕ್ಕಾದರೂ ನಮ್ಮದೇ ಆದ ಒಂದು ಸಂಘ ಬೇಕು, ದುಃಖದಲ್ಲಿದ್ದಾಗ ನಮ್ಮ ಅಳಲನ್ನು ತೋಡಿಕೊಳ್ಳಲು ಒಂದಷ್ಟು ಜನರ ಅಗತ್ಯ ನಮ್ಮೆಲ್ಲರಿಗೂ ಖಂಡಿತ ಇದೆ. ಅದರಂತೆ ಕಿರುತೆರೆಯಲ್ಲಿರುವ ಎಲ್ಲಾ ಶ್ರಮಜೀವಿಗಳ ಏಳಿಗೆಗಾಗಿಯೇ ಇರುವ ಸಂಘವೇ ನಮ್ಮ ಈ ಕೆಟಿವಿಎ.




